ಕಾಡಾನೆ ಹಿಂಡು ಕೆಂಗೇರಿ ಬಳಿ ಪ್ರತ್ಯಕ್ಷ
ಬೆಂಗಳೂರು, ನ. 19– ಕಳೆದ 9 ರಂದು ಹುಡುಗನೊಬ್ಬನನ್ನು ತುಳಿದು ಸಾಯಿಸಿ, ಎರಡು ದಿನಗಳ ಕಾಲ ಕೆಂಗೇರಿ ಮತ್ತು ವಿಶ್ವನೀಡಂ ಸುತ್ತಮುತ್ತಲಿನ ಗದ್ದೆ, ತೋಟಗಳನ್ನು ಧ್ವಂಸ ಮಾಡಿ ಅಡವಿಯಲ್ಲಿ ಅಡಗಿ ಹೋದ ಒಂಬತ್ತು ಆನೆಗಳ ಹಿಂಡು ಇಂದು ಮತ್ತೆ ಕೆಂಗೇರಿಯ ಬಳಿ ಪ್ರತ್ಯಕ್ಷವಾಯಿತು.