ಮೈಸೂರು: ವೃದ್ಧೆಯೊಬ್ಬರು ಹಲವು ವರ್ಷಗಳಿಂದ ಭಿಕ್ಷೆ ಬೇಡಿ ಸಂಪಾದಿಸಿದ್ದ ₹ 2 ಲಕ್ಷ ಹಣವನ್ನು ದೇವಸ್ಥಾನಕ್ಕೆ ದೇಣಿಗೆಯಾಗಿ ನೀಡಿದ್ದಾರೆ. ನಗರದ ಒಂಟಿಕೊಪ್ಪಲು ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ ಪ್ರವೇಶ ದ್ವಾರದ ಬಳಿ ಭಿಕ್ಷೆ ಬೇಡುತ್ತಿರುವ ಎಂ.ವಿ.ಸೀತಾಲಕ್ಷ್ಮಿ ಅದೇ ದೇವಾಲಯಕ್ಕೆ ಈ ಕೊಡುಗೆ ನೀಡಿದ್ದಾರೆ.