ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕರೇ ಇಲ್ಲದ ಯುವಜನೋತ್ಸವ

Last Updated 22 ನವೆಂಬರ್ 2017, 9:00 IST
ಅಕ್ಷರ ಗಾತ್ರ

ಕೊಪ್ಪಳ: ‘ಪ್ರತಿಯೊಬ್ಬರಲ್ಲೂ ವಿಶಿಷ್ಟ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸುವ ಕೆಲಸ ನಡೆಯಬೇಕಿದೆ. ಪ್ರತಿಭೆ ಹೊರಬರಲು ಯುವಜನೋತ್ಸವದಂತಹ ವೇದಿಕೆಗಳು ಸಹಕಾರಿ. ಪ್ರತಿಭಾವಂತರು ಇಂತಹ ವೇದಿಕೆಗಳ ಉಪಯೋಗ ಪಡೆದು ಪ್ರತಿಭೆ ಅನಾವರಣಗೊಳಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ರಾಮಣ್ಣ ಚೌಡ್ಕಿ ತಿಳಿಸಿದರು.

ನಗರದ ಸಾಹಿತ್ಯ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಉತ್ಸವದಲ್ಲಿ ಪಾಲ್ಗೊಂಡು ಕಲಾವಿದರು ತಮ್ಮ ಪ್ರತಿಭೆ ಪ್ರದರ್ಶಿಸಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಗವಿಸಿದ್ದಪ್ಪ ಕರಡಿ ಮಾತನಾಡಿ, ‘ಜಿಲ್ಲಾ ಪಂಚಾಯಿತಿ ಸದಸ್ಯರತ್ತ ನಿರ್ಲಕ್ಷ್ಯ ತೋರಲಾಗುತ್ತಿದೆ. ನಮಗೆ ಸರ್ಕಾರದಿಂದ ಯಾವುದೇ ಅನುದಾನ ದೊರೆಯುವುದಿಲ್ಲ. ಅಧ್ಯಕ್ಷರ ಅನುದಾನದಿಂದ ಮಾತ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು’ ಎಂದರು.

‘ಇಂತಹ ಸಾಂಸ್ಕೃತಿಕ ಕಾರ್ಯ ಕ್ರಮಗಳಿಗೆ ನೆರವು ನೀಡಲು ಸಹ ಸದಸ್ಯರಲ್ಲಿ ಅನುದಾನದ ಕೊರತೆ ಇದೆ. ಸದಸ್ಯರಿಗೂ ಅನುದಾನ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಸಭೆ ಕರೆದು ನಡಾವಳಿಗಳನ್ನು ತಯಾರಿಸಿ ಶೀಘ್ರದಲ್ಲಿಯೇ ಸರ್ಕಾರಕ್ಕೆ ಸಲ್ಲಿಸಲಾಗುವುದು’ ಎಂದರು.

ಎಪಿಎಂಸಿ ಸದಸ್ಯ ಬಸವರಾಜ್‌, ಪತ್ರಕರ್ತ ರಮೇಶ ಸುರ್ವೆ, ಕೊಳಲುವಾದಕ ನಾಗರಾಜ್‌ ಶ್ಯಾವಿ, ಜನಪದ ಕಲಾವಿದ ಶರಣಪ್ಪ ವಡಿಗೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ವೈ. ಸುದರ್ಶನ್‌, ಮಂಜುನಾಥ ಗೊಂಡಬಾಳ, ರಾಕೇಶ್‌ ಕಾಂಬ್ಳೇಕರ್‌, ಜಗದಯ್ಯ ಸಾಲಿಮಠ, ಸಿ.ವಿ.ಜಡಿಯವರ, ಸದಾಶಿವ ಪಾಟೀಲ, ನಾಗರತ್ನಾ ಮುಂತಾದವರು ಇದ್ದರು.

ಕೊಪ್ಪಳ: ಯುವಜನೋತ್ಸವದ ಕಾರ್ಯಕ್ರಮವು ಅವ್ಯವಸ್ಥೆಯಿಂದ ಕೂಡಿದೆಯೆಂದು ಬೇಸರಗೊಂಡ ಕಲಾವಿದರು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.

ಉತ್ಸವ ಕುರಿ ತು ಸರಿಯಾದ ಪ್ರಚಾರ ಇರಲಿಲ್ಲ. ಕಲಾವಿದರಿಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ. ಸಭೆ ನಡೆಸಿಲ್ಲ. ವಿಷಯ ತಿಳಿದು ನಾವೇ ಖುದ್ದು ಉತ್ಸವಕ್ಕೆ ಬಂದಿದ್ದೇವೆ. ಬೆರಳೆಣಿಕೆಯಷ್ಟು ಕಲಾವಿದರನ್ನು ಇಲಾಖೆ ನಿಕೃಷ್ಠವಾಗಿ ಕಾಣುತ್ತಿದೆ. ಯುವಕರು ಇಲ್ಲದ ಕಾರಣಕ್ಕೆ ಶಾಲಾ ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆತರಲಾಗಿದೆ’ ಎಂದು ಕಲಾವಿದರು ದೂರಿದರು.

ನಂತರ ನಡೆದ ಕಾರ್ಯಕ್ರಮದಲ್ಲಿ ಆಕ್ಷೇಪ ವ್ಯಕ್ತಪಡಿಸಿದ ಕಲಾವಿದ ಮಾರುತಿ ಬಿನ್ನಾಳ, ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅವ್ಯವಹಾರಗಳ ಆಗರವಾಗಿದೆ. ಛಾಯಾಚಿತ್ರಗಳನ್ನು ತೋರಿಸಿ ಮೂಲಕ ಹಣ ಪಡೆಯು ತ್ತಿದ್ದಾರೆ’ ಎಂದು ಆರೋಪಿಸಿದರು.

ಪತ್ರಕರ್ತ ರಮೇಶ ಸುರ್ವೆ ಮಾತನಾಡಿ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಹಳಷ್ಟು ಹಣ ನೀಡಲಾಗುತ್ತದೆ. ಆದರೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಅಷ್ಟೊಂದು ಅನುದಾನ ಬರುವುದಿಲ್ಲ ಎಂದರು.

* * 

ಜಿಲ್ಲಾ ಪಂಚಾಯಿತಿ ಸದಸ್ಯರು ಇಂದು ‘ಬೇಡವಾದ ಕೂಸು’ ಆಗಿದ್ದಾರೆ. ನಮಗೆ ಸರ್ಕಾರದಿಂದ ಯಾವುದೇ ಅನುದಾನ ದೊರೆಯುವುದಿಲ್ಲ.
ಗವಿಸಿದ್ದಪ್ಪ ಕರಡಿ, ಸದಸ್ಯ, ಜಿಲ್ಲಾ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT