ಭೇಟಿಗೆ ನಿರಾಕರಣೆ: ಹೊಸ ಬಡಾವಣೆ ಠಾಣೆಯಲ್ಲಿದ್ದ ಆರೋಪಿತರಾದ ಯೂಸೂಫ್ ಮತ್ತು ರಿಯಾಜ್ ಅವರನ್ನು ಭೇಟಿ ಮಾಡಲು ಕುಟುಂಬದವರಿಗೆ ಅವಕಾಶ ನಿರಾಕರಿಸಿದರು. ಮಾಧ್ಯಮದವರಿಗೂ ಆರೋಪಿಗಳ ಹೇಳಿಕೆ ಪಡೆಯಲು ಬಿಡಲಿಲ್ಲ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗುತ್ತಿದೆ. ಹೀಗಾಗಿ ಭೇಟಿಗೆ ಅವಕಾಶ ಕೊಡುವುದಿಲ್ಲ ಎಂದು ಮಾಧ್ಯಮದವರಿಗೆ ಸಬ್ ಇನ್ ಸ್ಪೆಕ್ಟರ್ ರಾಘವೇಂದ್ರ, ಸಿಪಿಐ ರಾಧಾಕೃಷ್ಣ ಹೇಳಿದ್ದಾರೆ.