ವಾಸ್ತವವಾಗಿ, ಆಚಾರ್ಯ ‘ಶ್ರೀ’ಯವರು ಕುವೆಂಪು ಅವರನ್ನು ಕರೆದರಂತೆ: ‘ಬನ್ನಿ, ಕರ್ನಾಟಕವನ್ನೆಲ್ಲ ಸುತ್ತಿ ಜಾಗೃತಿ ಮೂಡಿಸೋಣ!’ ಕುವೆಂಪು ಆ ಕರೆಯನ್ನು ನಯವಾಗಿ ನಿರಾಕರಿಸಿದರಂತೆ: ‘ನನ್ನ ಧರ್ಮಂ ನನಗೆ, ನಿಮ್ಮ ಧರ್ಮಂ ನಿಮಗೆ!’ (ಇಬ್ಬರದೂ ಕನ್ನಡದ ‘ಧರ್ಮ’ವೇ). ಆದರೂ ಕುವೆಂಪು ಅವರ ಮೇಲೆ ‘ಶ್ರೀ’ ಪ್ರಭಾವ ಸಾಕಷ್ಟಿದೆ.