‘ಗ್ರಾಮದಲ್ಲಿ ಇಂಟರ್ನೆಟ್ ಸಂಪರ್ಕ ಸರಿ ಇಲ್ಲ. ಇದರಿಂದ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಪಡಿತರ ಚೀಟಿದಾರರು ಗುಡ್ಡ ಹತ್ತಿ ಸಿಗ್ನಲ್ ಬರುವವರೆಗೂ ಕಾದು ಹೆಬ್ಬೆಟ್ಟು ಗುರುತು ನೀಡಬೇಕಿದೆ. ಪ್ರತಿದಿನ ಕೂಲಿ ಕೆಲಸ ಬಿಟ್ಟು ಗುಡ್ಡ ಗುಡ್ಡ ಅಲೆದಾಡಬೇಕಿದೆ. ಧಾನ್ಯಕ್ಕಾಗಿ ಎಷ್ಟೊಂದು ಬಹಳ ತ್ರಾಸು ಪಡಬೇಕಿದೆ’ ಎಂದು ಹನುಮಂತ, ಗದ್ದೆಪ್ಪ, ನಿಂಗಪ್ಪ, ಸದ್ದಪ್ಪ, ಮಾನಪ್ಪ, ದುರುಗಮ್ಮ, ಸಹದೇವಪ್ಪ, ಹುಲುಗಪ್ಪ, ಯಂಕಪ್ಪ, ಶರಣಗೌಡ ಆಕ್ರೋಶ ವ್ಯಕ್ತಪಡಿಸಿದರು.