ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಲುವೆ ಕೊಳಚೆ ತೆರವುಗೊಳಿಸಿ’

Last Updated 24 ನವೆಂಬರ್ 2017, 6:24 IST
ಅಕ್ಷರ ಗಾತ್ರ

ರಾಯಬಾಗ: ‘ಪಟ್ಟಣದ ಒಂದನೆ ವಾರ್ಡ್‌ನಲ್ಲಿನ ಕಾಲುವೆಯಲ್ಲಿ ಕೊಳಚೆ ತುಂಬಿಕೊಂಡಿದೆ. ಇದರಿಂದ ನೀರು ಕಟ್ಟಿಕೊಂಡು ದುರ್ವಾಸನೆ ಉಂಟಾಗಿದೆ. ಕೂಡಲೇ ಕೊಳಚೆ ತೆರವುಗೊಳಿಸಿ ಕಾಲುವೆ ದುರಸ್ತಿ ಮಾಡಬೇಕು’ ಎಂದು ಪಿ.ಎಲ್.ಡಿ ಬ್ಯಾಂಕ್‌ ಅಧ್ಯಕ್ಷ ಪ್ರತಾಪರಾವ್ ಪಾಟೀಲ ಅವರು ಪಟ್ಟಣ ಪಂಚಾಯ್ತಿ ಸದಸ್ಯರಿಗೆ ಸಲಹೆ ನೀಡಿದರು.

ಪಟ್ಟಣದ ಒಂದನೇ ವಾರ್ಡ್‌ನ ನಿವಾಸಿಗಳ ಕುಂದುಕೊರತೆಯನ್ನು ಮಂಗಳವಾರ ಆಲಿಸಿದ ಮಾತನಾಡಿದ ಅವರು, ಪಟ್ಟಣದ ಹೊರ ವಲಯಲ್ಲಿ ಹಾದು ಹೋಗುವ 3 ಕಿ.ಮೀ ಉದ್ದದ ಕಾಲುವೆಗೆ ಪೈಪ್‌ಗಳನ್ನು ಹಾಕುವುದರಿಂದ ಈ ಸಮಸ್ಯೆ ನಿವಾರಣೆ ಆಗುತ್ತದೆ’ ಎಂದರು. ಪಟ್ಟಣ ಪಂಚಾಯ್ತಿ ಸದಸ್ಯರಾದ ಬಿ.ಎಸ್. ಗಡ್ಡೆ, ಕಲ್ಲಪ್ಪ ಹಳಿಂಗಳಿ, ರಾಜು ತರಾಳ, ಹನಮಂತ ಸಾನೆ, ಜಾವೀದ್‌ ಮೋಮಿನ್‌, ಎ.ಎಸ್. ಬನಹಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT