ಕರ್ನಾಟಕ ನೀರಾವರಿ ನಿಗಮದ ಬೋರ್ಡ್ನಲ್ಲಿ ₹24 ಕೋಟಿ ವೆಚ್ಚದ ಏತ ನೀರಾವರಿ ಯೋಜನೆಗೆ ಅನುಮೋದನೆ ದೊರೆತಿದೆ. ಇದರಿಂದಾಗಿ, ತುಂಗಭದ್ರಾ ನದಿಯಿಂದ ಗುಡ್ಡದಮಾದಾಪುರ, ಕಮಲಾಪುರ, ಹಿರೇಕಬ್ಬಾರ, ಅಣಜಿ, ನಾಗವಂದ, ಹೊಸಕಟ್ಟಿ, ಗಂಗಾಯಿಕೊಪ್ಪ ಹಾಗೂ ಶಿಕಾರಿಪುರ ತಾಲ್ಲೂಕಿನ ಗುಡದಳ್ಳಿ ಗ್ರಾಮಗಳ ಕೆರೆಗಳಿಗೆ ನೀರು ಹರಿಯಲಿದೆ ಎಂದು ಹೇಳಿದರು.