‘ಅಪ್ಸರಕೊಂಡ ಮಠ ಹಾಗೂ ಹವ್ಯಕರ ಮೂಲಸ್ಥಾನವಾದ ಹೈಗುಂದದ ಅಭಿವೃದ್ಧಿಯಲ್ಲಿ ಭಕ್ತರು ಪಾಲ್ಗೊಳ್ಳಬೇಕು’ ಎಂದು ಸಲಹೆ ನೀಡಿದರು. ಪಿ.ಎಸ್.ಭಟ್ ಉಪ್ಪೋಣಿ, ಮಾನ್ಯ ಸುಬ್ರಾಯ ಹೆಗಡೆ, ವಿದ್ಯಾವಾಹಿನಿ ಮಹಾಮಂಡಲ ಪ್ರಧಾನ ಎಸ್.ಜಿ.ಭಟ್ ಕಬ್ಬಿನಗದ್ದೆ,ಕೆ.ಜಿ.ಹೆಗಡೆ, ಹೈಗುಂದ, ವಲಯಾಧ್ಯಕ್ಷ ಎಲ್.ಎಸ್.ಹೆಗಡೆ, ಗಾಳಿ ಉಪಸ್ಥಿತರಿದ್ದರು. ಮೂಡ್ಕಣಿಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನಕ್ಕೆ ಸ್ವಾಮೀಜಿ ಭೇಟಿ ನೀಡಿದರು.