ಮಾದರಿ ಯುವಕ ಸಂಘದ ಅಧ್ಯಕ್ಷ ಎಚ್.ಎಸ್.ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ.ಅಧ್ಯಕ್ಷೆ ಲತಾ ಸತೀಶ್, ಉಪಾಧ್ಯಕ್ಷೆ ಪದ್ಮಾ, ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ಎನ್.ಎಸ್.ರಮೇಶ್, ತೊರೆನೂರು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಟಿ.ದಿನೇಶ್, ನಿರ್ದೇಶಕರಾದ ಎಸ್.ಎಸ್.ಚಂದ್ರಶೇಖರ್, ಟಿ.ಬಿ.ಜಗದೀಶ್, ಐಎನ್ಟಿಯುಸಿ ಮುಖಂಡ ಉದಯ, ಮಹೇಶ್, ಪುಟ್ಟೆಗೌಡ, ಶಿಕ್ಷಕರಾದ ಎಚ್.ಎನ್.ಮಂಜುನಾಥ್, ಕುಮಾರ್, ಪ್ರಸನ್ನ, ಚೇತನ ಉಪಸ್ಥಿತರಿದ್ದರು. ಭದ್ರಾವತಿಯ ತೃಪ್ತಿ ಮೆಲೋಡಿ ಆರ್ಕೆಸ್ಟ್ರಾ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.