ಧರ್ಮ ಸಂಸತ್ ನಲ್ಲಿ ಅಸ್ಪೃಶ್ಯತೆ ನಿವಾರಣೆ, ಪರಿಸರ, ಗೋಹತ್ಯೆ ನಿಷೇಧ, ಹೆಣ್ಣು ಭ್ರೂಣ ಹತ್ಯೆ ನಿಷೇಧ ಹಾಗೂ ಧರ್ಮ ಸಂಸ್ಕಾರಗಳನ್ನು ಜೀವಂತವಾಗಿ ಇಡುವ ಬಗ್ಗೆಯೂ ಚರ್ಚೆ ಮಾಡಲಾಗಿದೆ ಎಂದರು. ದೇಶದಲ್ಲಿ ಬಹುಸಂಖ್ಯಾತ- ಅಲ್ಪ ಸಂಖ್ಯಾತ ಎಂಬ ಭೇದ ಭಾವ ಸಂಪೂರ್ಣವಾಗಿ ನಿವಾರಣೆ ಆಗಬೇಕು. ಈ ಬಗ್ಗೆ ಸಂವಿಧಾನದ ಸಂಶೋಧನೆ ನಡೆಸಿ, ಸರಿಯಾದ ನಿರ್ಣಯ ತೆಗೆದುಕೊಳ್ಳಬೇಕು ಎಂದು ಧರ್ಮ ಸಂಸದ್ ನಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು. ವಿಶ್ವ ಹಿಂದೂ ಪರಿಷತ್ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಸುರೇಂದ್ರ ಜೈನ್ ಇದ್ದರು.