ದೇವಸ್ಥಾನವನ್ನು ತಳಿರು ತೋರಣ ಗಳಿಂದ ಸಿಂಗರಿಸಲಾಗಿತ್ತು. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿದ್ದರಿಂದ ಭಕ್ತರ ಓಡಾಟಕ್ಕೆ ತೊಂದರೆಯಾಗಲಿಲ್ಲ. ದೇವಸ್ಥಾನದ ಸುತ್ತ ಕಂಡು ಬಂದ ಹುತ್ತಗಳ ಸುತ್ತ ನೆರೆದ ಭಕ್ತರು, ತಾವು ತಂದಿದ್ದ ಹಾಲು, ಬೆಣ್ಣೆಯನ್ನು ಹುತ್ತಕ್ಕೆ ಸುರಿದರು. ಬಾಳೆಹಣ್ಣು, ಎಲೆ ಅಡಿಕೆ ಇಟ್ಟು ಗಂಧದಕಡ್ಡಿ, ಕರ್ಪೂರದಾರತಿ ಬೆಳಗಿದರು.