ಉಡುಪಿಯಲ್ಲಿ ನಡೆಯುತ್ತಿರುವ 12ನೇ ಧರ್ಮ ಸಂಸತ್ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಇಂತಹ ಸಂದಿಗ್ಧ ಕಾಲದಲ್ಲಿ ಧರ್ಮ ಪೀಠಾಚಾರ್ಯರು, ಸಂತರು, ಶರಣರು, ಸಜ್ಜನರು, ಸಮಾಜ ಚಿಂತಕರು, ರಾಜಕೀಯ ಧುರೀಣರು ಎಚ್ಚೆತ್ತು ಧರ್ಮ ಸಂಸ್ಕೃತಿ ಮೌಲ್ಯಗಳ ಸಂರಕ್ಷಣೆಗೆ ಶ್ರಮಿಸುವ ಅಗತ್ಯ ಇದೆ. ಹಿಂದೂಸ್ತಾನದಲ್ಲಿ ಇರುವವರೆಲ್ಲರೂ ಹಿಂದೂಗಳು ಎಂಬುದನ್ನು ಮರೆಯಬಾರದು. ಅವರವರ ಧರ್ಮ ಆಚರಣೆ ಬೇರೆ ಬೇರೆಯಾದರೂ ಸಮಷ್ಟಿ ಪ್ರಜ್ಞೆಯಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಬೆಳೆಯಬೇಕಿದೆ’ ಎಂದಿದ್ದಾರೆ.