ದೇವರ ದರ್ಶನ ಹಾಗೂ ವಿವಿಧ ಪೂಜಾ ಸೇವೆಗಳಿಗಾಗಿ ಊರಿನ ಜನರ ಸಹಕಾರದೊಂದಿಗೆ ದೇವಸ್ಥಾನದ ಸಮಿತಿಯ ವತಿಯಿಂದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾಂಪ್ರದಾಯಿಕ ವಿಧಿ–ವಿಧಾನಗಳನ್ವಯ ವಿವಿಧ ಪೂಜಾ ಕೈಂಕರ್ಯಗಳನ್ನು ಕೈಗೊಂಡು ದೇವರಿಗೆ ಅರ್ಪಿಸಲಾದ ಸುಟ್ಟೇವು, ಬಾಳೆಹಣ್ಣು, ಪಂಚಕಜ್ಜಾಯ ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು.