‘ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದವರು ಘನತೆಯಿಂದ ಮಾತನಾಡಬೇಕು. ಆದರೆ, ಚಂಪಾ ಅವರ ಭಾಷಣ ರಾಜಕೀಯ ಪಕ್ಷವೊಂದನ್ನು ಓಲೈಕೆ ಮಾಡುವಂತಿತ್ತು. ನಿರ್ದಿಷ್ಟ ಪಕ್ಷಕ್ಕೆ ಮತ ನೀಡಿ ಎಂದು ಕರೆ ನೀಡಿದ್ದು ಖಂಡನೀಯ. ಕಾಂಗ್ರೆಸ್ ಮೇಲಿನ ಪ್ರೀತಿಗೆ ಈ ರೀತಿಯಾಗಿ ಮಾತನಾಡಬಾರದಿತ್ತು’ ಎಂದು ವೇದಿಕೆ ಅಧ್ಯಕ್ಷ ಬಾಲಕೃಷ್ಣ ಆರೋಪಿಸಿದರು.