ಅಮರೇಶ ಅವರು ತಯಾರಿಸದ ಮೂರ್ತಿಗಳಿಲ್ಲ. ಪಶು, ಪಕ್ಷಿಗಳಿಲ್ಲ. ಗ್ರಾಮೀಣ ಸೊಗಡಿನಲ್ಲಿ ಸಿಮೆಂಟ್ ಕಲಾಕೃತಿಗಳನ್ನು ಮಾಡುವುದರಲ್ಲಿ ಸಿದ್ಧಹಸ್ತರು. ಪುಣೆ, ಬೆಂಗಳೂರು, ಕೊಪ್ಪಳ, ಆಲಮಟ್ಟಿ, ಹುಬ್ಬಳ್ಳಿ, ಸಿಗ್ಗಾವ, ಘತ್ತರಗಿ, ಗೊಟಗುಡಿ ಹೀಗೆ ಹತ್ತಾರು ಊರುಗಳಲ್ಲಿ ಅಮರೇಶ ಹಾಗೂ ಅವರ ಸಂಗಡಿಗರು ತಯಾರಿಸಿದ ಕಲಾಕೃತಿಗಳು ನೋಡುಗರ ಮನಸ್ಸನ್ನು ಸೆಳೆಯುತ್ತಿವೆ.