ಅಕ್ಕಿಆಲೂರ: ‘ನಮ್ಮ ಶಾಲೆಗೆ ಕಟ್ಟಡ ಭಾಗ್ಯ ಒದಗಿ 10 ವರ್ಷ ಕಳೆದರೂ ಶೌಚಾಲಯ ಭಾಗ್ಯ ಇನ್ನೂ ಒದಗಿಲ್ಲ. ಈ ಕುರಿತು ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರು ಪ್ರಯೋಜನವಾಗಿಲ್ಲ. ಹೀಗಾಗಿ ನಿವೇ ಕ್ರಮ ಕೈಗೊಳ್ಳಬೇಕು’ ಎಂದು ಹಿರೇಬಾಸೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ನಾಗವೇಣಿ ತಿಮ್ಮಾಪೂರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.