ಬೈಂದೂರು, ಕುಂದಾಪುರದಿಂದ ಬಂದವರು ಕಲ್ಯಾಣಪುರ ಎಸ್ವಿಡಿ ಶಾಲೆ ಮೈದಾನದಲ್ಲಿ ಊಟ ಮಾಡಿದರು. ಕಾರ್ಕಳ, ಹೆಬ್ರಿ, ಮೂಡಬಿದಿರೆಯಿಂದ ಬಂದಿದ್ದವರು ಪರ್ಕಳದ ಶಾಲೆಯಲ್ಲಿ ಊಟ ಸವಿದರು. ನಾಲ್ಕೂ ಕೇಂದ್ರಗಳು ಸೇರಿ ಸುಮಾರು ಒಂದು ಲಕ್ಷ ಜನರಿಗೆ ಆಗುವಂತೆ ಊಟ ತಯಾರಿಸಲಾಗಿತ್ತು. ಧರ್ಮ ಸಂಸತ್ ನಡೆದ ರಾಯಲ್ ಗಾರ್ಡನ್ನ ‘ಕೃಷ್ಣ ಪ್ರಸಾದಂ’ ಅನ್ನ ಕೇಂದ್ರದಲ್ಲಿಯೂ ಸಂತರು ಹಾಗೂ ಸ್ವಯಂ ಸೇವಕರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.