’ಯೋಗೀಶಗೌಡ ಗೌಡರ ಕೊಲೆಗೂ ಮೊದಲು 2016 ರ ಏಪ್ರಿಲ್ 20ರಂದು (ಪೋಸ್ಟ ಆಗಿದ್ದು ಏ.18) ಸಚಿವ ವಿನಯ ಕುಲಕರ್ಣಿ, ಅವರ ಪತ್ನಿ ಶಿವಲೀಲಾ ಕುಲಕರ್ಣಿ ಹಾಗೂ ಸಹೋದರ ವಿಜಯ ಕುಲಕರ್ಣಿ ಹೆಸರಿನಲ್ಲಿ ನನಗೆ ಪತ್ರಗಳು ಬಂದಿವೆ. ಯಾರೋ ಮಾನಸಿಕ ಸ್ಥಿಮಿತ ಕಳೆದುಕೊಂಡವರು ಅತೀ ಅಶ್ಲೀಲವಾಗಿ ಪತ್ರ ಬರೆದಿದ್ದು, ಅದನ್ನು ನಿರ್ಲಕ್ಷ್ಯ ಮಾಡಿದ್ದೇನೆ. ಆದರೆ ಸಚಿವ ವಿನಯ ಕುಲಕರ್ಣಿ ಅವರ ವಿರುದ್ಧ ನಾನೇ ಪತ್ರ ಬರೆದಿದ್ದೇನೆ ಎಂದು ಆರೋಪ ಮಾಡಿದ ಹಿನ್ನೆಲೆಯಲ್ಲಿ ನನಗೆ ಬಂದಿರುವ ಪತ್ರಗಳ ಕುರಿತೂ ಅನುಮಾನ ವ್ಯಕ್ತವಾಗುತ್ತಿದೆ’ ಎಂದ ಅವರು, ಪತ್ರಗಳನ್ನು ಪ್ರದರ್ಶಿಸಿದರು. ಸುದ್ದಿಗೋಷ್ಠಿಯಲ್ಲಿ ಸೀಮಾ ಮಸೂತಿ, ತವನಪ್ಪ ಅಷ್ಟಗಿ, ಶಂಕರ ಮುಗದ ಇದ್ದರು.