ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ ಮಾತನಾಡಿ, 'ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ತ್ಯಾಗದಿಂದ ಸಿದ್ಧಿ ಎಂಬ ಮಹಾನ್ ಸಂದೇಶವನ್ನು ಜನತೆಗೆ ತಿಳಿಸುವುದು ಆದ್ಯ ಕರ್ತವ್ಯವಾಗಿದೆ. ಸಮಸ್ತ ಶ್ರಾವಕ, ಶ್ರಾವಕಿಯರು ಧರ್ಮ ಪ್ರಭಾವನೆಗಾಗಿ ನಿರಂತರ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ಧಾರ್ಮಿಕತೆ, ಸಂಸ್ಕೃತಿಯ ಪ್ರತಿರೂಪವಾಗಿರುವ ಪುರಾತನ ಮಂದಿರ ಜೀಣೋದ್ಧಾರಗೊಂಡು ನೂತನ ಶಿಖರ ಮಾನಸ್ತಂಭ ಹಾಗೂ ಕಲ್ಯಾಣ ಮಂಟಪ ನಿರ್ಮಾಣಗೊಂಡಿವುದು ಸಂತಸದ ವಿಷಯ' ಎಂದರು. ಸಮಾರಂಭದಲ್ಲಿ ಶ್ರೀ ಆದಿನಾಥ ದಿಗಂಬರ ಜೈನ ಟ್ರಸ್ಟ್ ಸದಸ್ಯರು ಹಾಗೂ ಶ್ರಾವಕ ಶ್ರಾವಕಿಯರು ಪಾಲ್ಗೊಂಡಿದ್ದರು.