ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವೈನ್ಗಳಲ್ಲಿ ವಿವಿಧ ನಮೂನೆ ಇದೆ. ಬಣ್ಣ, ರುಚಿಗಳು ಕೂಡ ಒಂದಕ್ಕೊಂದು ವಿಭಿನ್ನ ಇದೆ ಎಂದು ಕೇಳಿದ್ದೇನೆ. ಈ ನಿಟ್ಟಿನಲ್ಲಿ ದ್ರಾಕ್ಷಾರಸ ಉತ್ಸವವನ್ನು ನಗರದಲ್ಲಿ ಆಯೋಜಿಸಿರುವುದು ಖುಷಿ ತಂದಿದೆ. ರಾಜ್ಯದಲ್ಲಿಯೂ ಒಳ್ಳೆಯ ವೈನ್ಗಳ ಉತ್ಪಾದನೆಯಾಗಬೇಕು. ಆ ಮೂಲಕ ರೈತರಿಗೆ, ದ್ರಾಕ್ಷಿ ಬೆಳೆಗಾರರಿಗೆ ಸಹಾಯವಾಗಬೇಕು. ಕೃಷಿ ಪ್ರಧಾನ ಕೈಗಾರಿಕೆಗಳು ಹೆಚ್ಚು ಸ್ಥಾಪನೆಯಾಗಬೇಕು. ಅಲ್ಲಿನ ಉತ್ಪಾದನೆಗಳಿಗೆ ಮಾರುಕಟ್ಟೆ ಒದಗಿಸಬೇಕು’ ಎಂದು ಹೇಳಿದರು.