ಬಾಗಲಕೋಟೆ: ‘ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಂದು ಅವಧಿಗೆ ಮುಂದುವರಿದರೆ ಎಡಬಿಡಂಗಿಗಳು, ದೇಶದ್ರೋಹಿಗಳಿಗೆ ಈ ದೇಶದಲ್ಲಿ ಉಳಿಗಾಲವಿಲ್ಲ’ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
ನಗರದಲ್ಲಿ ಮಂಗಳವಾರ ಸಂಜೆ ನಡೆದ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು, ‘ಜಾತ್ಯತೀತರು, ಪ್ರಗತಿಪರರು, ಕ್ರಾಂತಿಕಾರಿಗಳ ಹೆಸರಿನಲ್ಲಿ ದೇಶ ಹಾಗೂ ಜನರ ದಿಕ್ಕುತಪ್ಪಿಸುತ್ತಿರುವರದ್ದು ಇದೇ ಕೊನೆಯ ತಲೆಮಾರು’ ಎಂದು ಹೇಳಿದರು.
ಸಾಹಿತ್ಯದ ಮೌಲ್ಯ ಕೊಂದ ಸಿ.ಎಂ: ‘ಎರಡು ಅಕ್ಷರ ಬರೆದು ಪೆನ್ನನ್ನು ಮತ್ತೊಬ್ಬರ ಬೂಟಿನ ಅಡಿಗೆ ಇಡುವ ಗಂಜಿ ಗಿರಾಕಿಗಳನ್ನು ಬಳಸಿಕೊಂಡು ಸಾಹಿತ್ಯದ ಮೌಲ್ಯ ಕೊಂದ ಶ್ರೇಯ ಸಿದ್ದಣ್ಣನಿಗೆ ಸಲ್ಲುತ್ತದೆ’ ಎಂದು ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟೀಕಿಸಿದರು.
‘ಎರಡು ಅಕ್ಷರ ಗೀಚಿ ಸಾಹಿತಿ ಪಟ್ಟ ಕಟ್ಟಿಕೊಳ್ಳುವ ಎಡಬಿಡಂಗಿಗಳು ಚಪ್ರಾಸಿ ಸಾಹಿತಿಗಳು’ ಎಂದು ಅನಂತಕುಮಾರ ಜರಿದರು.