ಭೋಜನ ವಿರಾಮದ ನಂತರ ಸಭೆ ಸೇರಿದಾಗ ಬಿರುಗಾಳಿಯಂತೆ ಈ ಪ್ರಶ್ನೆ ಎದ್ದಿತು. ‘ಡಾ. ಪಿ.ಸಿ. ಘೋಷ್ರ ಸರ್ಕಾರವನ್ನು ಪಶ್ಚಿಮ ಬಂಗಾಳ ವಿಧಾನ ಸಭಾಧ್ಯಕ್ಷರು ಮಾನ್ಯ ಮಾಡುವ ‘ಉತ್ಕಟ ಪರಿಸ್ಥಿತಿ’ ಉಂಟಾಗಿದೆ. ಅವರ ಈ ಕ್ರಮ ಸಂವಿಧಾನಾತ್ಮಕ ಪ್ರಶ್ನೆ, ಸಭಾಧ್ಯಕ್ಷರು ತಮ್ಮ ಸಂಯುಕ್ತ ರಂಗದ ಮಿತ್ರರ ಮೂಲಕ ಬಿಕ್ಕಟ್ಟನ್ನು ಹಾಗೆಯೇ ಉಳಿಸಲು ಯತ್ನಿಸುತ್ತಿದ್ದಾರೆ’ ಎಂದು ಸ್ವತಂತ್ರ ಪಕ್ಷದ ಸದಸ್ಯ ಶ್ರೀ ಲೋಕನಾಥ ಮಿಶ್ರರು ಆರೋಪಿಸಿದರು.