ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಳಸಿದ್ದೇಶ್ವರ ಕಾರ್ತಿಕೋತ್ಸವ, ಸಹಸ್ರ ದೀಪೋತ್ಸವ

Last Updated 30 ನವೆಂಬರ್ 2017, 6:18 IST
ಅಕ್ಷರ ಗಾತ್ರ

ದಾವಣಗೆರೆ: ‘ಬಿಡುವಿಲ್ಲದ ವ್ಯಾಪಾರ –ವಹಿವಾಟಿನ ನಡುವೆಯೂ ದಾವಣಗೆರೆ ಎಪಿಎಂಸಿಯ ವರ್ತಕರು ಕಾರ್ತಿಕೋತ್ಸವದಂಥ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದರು.

ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದ ಆವರಣದಲ್ಲಿ ಸೋಮವಾರ ರಾತ್ರಿ ವಿಶ್ವಬಂಧು ಮರುಳಸಿದ್ದೇಶ್ವರ ಕಾರ್ತಿಕೋತ್ಸವ ದಶಮಾನೋತ್ಸವ ಪ್ರಯುಕ್ತ ನಡೆದ ಸಹಸ್ರ ದೀಪೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿವೃತ್ತ ಐಎಫ್ಎಸ್‌ ಅಧಿಕಾರಿ ನಾಗರಾಜ್‌ ಹಂಪೋಳ್‌ ಮಾತನಾಡಿ, ‘ಮರುಳಸಿದ್ಧರ ಸಂದೇಶ ಇಂದಿಗೂ ಪ್ರಸ್ತುತ. ಅಹಿಂಸೆ, ಪರಮತ ಸಹಿಷ್ಣುತೆ ಮೊದಲಾದ ಮಾನವೀಯ ಮೌಲ್ಯಗಳಿಗೆ ಒತ್ತುಕೊಟ್ಟವರು ಅವರು’ ಎಂದು ಹೇಳಿದರು.

ಶ್ರೀಮದ್‌ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಕೆ.ಆರ್‌.ಜಯದೇವಪ್ಪ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷ ರಾಮಗೊಂಡನಹಳ್ಳಿ ಜಯಣ್ಣ, ವರ್ತಕರಾದ ಮೆಳ್ಳೆಕಟ್ಟೆ ಸಿದ್ದೇಶ್‌, ಬೇತೂರು ರಾಜಣ್ಣ, ವೈ.ವಸಂತಪ್ಪ, ಸಿರಿಗೆರೆ ಸಿದ್ದೇಶ್‌, ಬುಳ್ಳಾಪುರದ ಸಿದ್ದೇಶ್‌, ಕಾಕನೂರು ಪ್ರಭುದೇವ, ಕೊರಟಗೆರೆ ಶಿವಕುಮಾರ್‌, ಶಿವನಹಳ್ಳಿ ರೇವಣಸಿದ್ಧಪ್ಪ, ಎ.ಸಿ.ಶಿವಮೂರ್ತಿ, ದೇವರಮನಿ ಶಿವಕುಮಾರ್ ಇದ್ದರು.

ಕೋಶಾಧ್ಯಕ್ಷ ಕರೇಶಿವಪ್ಳ ಸಿದ್ದೇಶ್‌ ಸ್ವಾಗತಿಸಿದರು. ಕಾರ್ಯದರ್ಶಿ ನಾಗರಕಟ್ಟೆ ಪ್ರಕಾಶ್ ವಂದಿಸಿದರು. ಕಾರ್ತಿಕ ಸಮಿತಿ ನಿರ್ದೇಶಕ ಸಿ.ಜಿ.ಜಗದೀಶ ಕೂಲಂಬಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT