ಮಾಗಡಿ: ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿರುವ ಗ್ರಾಮೀಣ ಬಡಮಕ್ಕಳಿಗೆ ನಿರಂತರವಾಗಿ ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಸಾಂಸ್ಕೃತಿಕ ವಿಚಾರ ವೇದಿಕೆ ಗೌರವಾಧ್ಯಕ್ಷ ಎ.ಎಚ್.ಬಸವರಾಜು ತಿಳಿಸಿದರು.
ಪಟ್ಟಣದ ವಿದ್ಯಾನಗರದ ಸುಶೀಲ ಬಸವರಾಜು ಈಡಿಗ ಅವರ ಪುತ್ರ ಹರ್ಷಕದಂಬ ಅವರಿಗೆ ₹20 ಸಾವಿರದ ಚೆಕ್ ನೀಡಿ ಅವರು ಮಾತನಾಡಿದರು.
ಮಾಗಡಿ ತಾಲ್ಲೂಕಿನ ಪ್ರತಿಭಾವಂತ ಬಡ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉತ್ತಮ ಅಧಿಕಾರಿಗಳಾಗಬೇಕು ಎಂಬ ಸದುದ್ದೇಶದಿಂದ ವೈಯಕ್ತಿಕ ಸಹಾಯ ಮಾಡುತ್ತಿದ್ದೇವೆ. ಸಹಾಯ ಮಾಡುವುದರಲ್ಲಿ ಸ್ವಾರ್ಥವಿಲ್ಲ. ಬಡವರ ಮಕ್ಕಳು ಉನ್ನತ ದರ್ಜೆಯ ಅಧಿಕಾರಿಗಳಾಗಬೇಕು ಎಂದು ಅವರು ತಿಳಿಸಿದರು.
ಪ್ರಗತಿಪರ ಹೋರಾಟಗಾರರಾದ ಸಿ.ಜಯರಾಮು, ದೊಡ್ಡಿಲಕ್ಷ್ಮಣ್, ಬಿ.ಜೆ.ಪಿ. ಮುಖಂಡರಾದ ಮಾರಪ್ಪ, ಶಶಿಧರ್, ರಾಘವೇಂದ್ರ, ದಯಾನಂದ್ ಇದ್ದರು.