ಕಂಠೀರವ ಸ್ಟುಡಿಯೊದಲ್ಲಿ ಧಾರಾವಾಹಿಯ ಮುಹೂರ್ತ ನೆರವೇರಿಸಲಾಯಿತು. ಹಿರಿಯ ನಟ ಶ್ರೀನಾಥ್, ‘ಮೂರು ದಶಕದ ಹಿಂದೆ ಮಾನಸ ಸರೋವರ ಚಿತ್ರ ಶುರು ಮಾಡುವಾಗ ಎಲ್ಲರಿಗೂ ಚಾಲೆಂಜ್ ಆಗಿತ್ತು. ಇಂದಿಗೂ ಚಿತ್ರದ ಕಥೆ, ಹಾಡುಗಳು ಜನರಿಂದ ಮರೆಯಾಗಿಲ್ಲ. ನಾನು ಮನೋವೈದ್ಯನ ಪಾತ್ರದಲ್ಲಿ ಕಾಣಿಸಿಕೊಂಡು ಕ್ಲೈಮ್ಯಾಕ್ಸ್ನಲ್ಲಿ ಅರೆಹುಚ್ಚನಾಗುತ್ತೇನೆ. ಮುಂದೆ ಏನಾಗುತ್ತಾನೆ ಎನ್ನುವುದು ಧಾರಾವಾಹಿಯಲ್ಲಿ ಮೂಡಿಬರಲಿದೆ’ ಎಂದರು.