ಆದರೆ, ಇದನ್ನು ಪೊಲೀಸ್ ಕಮಿಷನರ್ ನಾಗರಾಜ ನಿರಾಕರಿಸಿದ್ದಾರೆ. ‘ರಾಜಿ ಮಾತುಕತೆ ಆರಂಭವಾಗಿರುವುದು ತಾಲ್ಲೂಕಿನ ಗೋವನಕೊಪ್ಪದಲ್ಲಿ. ಅದು ಗ್ರಾಮೀಣ ಠಾಣೆ ವ್ಯಾಪ್ತಿಗೆ ಬರುತ್ತದೆ. ಅದರ ನಂತರ ಶ್ರೀನಗರದಲ್ಲಿ ಮಾತುಕತೆ ನಡೆದಿದೆ. ಹೀಗಾಗಿ ಜಿಲ್ಲಾ ಪೊಲೀಸರೇ ಇದರ ತನಿಖೆ ನಡೆಸಬೇಕು. ಈ ವಿಷಯದಲ್ಲಿ ಎಸ್ಪಿಗೆ ಗೊಂದಲ ಇರಬೇಕು’ ಎಂದು ಕಮಿಷನರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.