‘ನಗರದಲ್ಲಿ ಹಂದಿಗಳ ಸಂಖ್ಯೆ ಅಧಿಕವಾಗಿದೆ. ಮಲ್ಲಮ ನಗರ, ವಿನಾಯಕ ನಗರ, ಸಿದ್ದರಾಮೇಶ್ವರ ಕಾಲೊನಿ, ಯಶವಂತ ನಗರ, ಹೌಸಿಂಗ್ ಕಾಲೊನಿ, ಬಕ್ಷಿ ಪ್ಲಾಟ್ ಬಡಾವಣೆಗಳಲ್ಲಿ 15 ದಿನಗಳಿಂದ ನಿತ್ಯ ಹಂದಿಗಳು ಸಾಯುತ್ತಿರುವುದರಿಂದ ದುರ್ಗಂಧದ ವಾತಾವರಣ ನಿರ್ಮಾಣವಾಗಿದೆ. ಹಂದಿಗಳ ಸಾವಿನಿಂದ ರೋಗ ಹರಡುವ ಭೀತಿಯಿಂದ ಜನರಲ್ಲಿ ಆತಂಕ ಉಂಟಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.