ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಗಂಗಾವತಿ, ಡಿ.ಬಿ.ಡೊಲಿ ಮಾತನಾಡಿ, ‘ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅವರ ಸಾಮಾಜಿಕ ಕಾರ್ಯಗಳಿಂದ ಡಂಬಳ ಕೋಮು ಸೌಹಾರ್ದಕ್ಕೆ ದೇಶದಲ್ಲೇ ಹೆಸರು ಪಡೆದಿದೆ. ಇಲ್ಲಿ ಎಲ್ಲ ಧರ್ಮದವರು ಸೇರಿ ಎಲ್ಲ ಹಬ್ಬಗಳನ್ನು ಪ್ರೀತಿ, ವಿಶ್ವಾಸ, ಹಾಗೂ ಸೌಹಾರ್ದದಿಂದ ಆಚರಿಸುತ್ತಾರೆ’ ಈ ವರ್ಷವೂ ಆ ಸಂಪ್ರದಾಯ ಮುಂದುವರಿಯಲಿದೆ ಎಂದು ಹೇಳಿದರು.