ಈ ಬಾರಿಯ ಸಮ್ಮೇಳನದಲ್ಲಿ ಕೃಷಿಸಿರಿಗೆ ಹೆಚ್ಚು ಒತ್ತು ನೀಡಿದರಿಂದ ಹೆಚ್ಚಿನ ಸಂಖ್ಯೆಯ ರೈತರು, ರೈತ ಹಿನ್ನೆಲೆಯ ಜನರು ಸಮ್ಮೇಳನದಲ್ಲಿ ಕಂಡುಬಂದರು. ವಿದ್ಯಾರ್ಥಿಗಳಿಗೆ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ವಿಶೇಷ ಅವಕಾಶವನ್ನು ಕಲ್ಪಿಸಿದರಿಂದ ವಿದ್ಯಾರ್ಥಿಗಳು ತಮ್ಮ ಶಿಕ್ಷಕರೊಂದಿಗೆ ನುಡಿಸಿರಿಗೆ ಬಂದು ಇಲ್ಲಿನ ಸಾಹಿತ್ಯದ ರುಚಿ, ಸಾಂಸ್ಕೃತಿಕ ಸೊಬಗನ್ನು ಅನುಭವಿಸಿದರು.