ಜಿಲ್ಲಾಡಳಿತ ಭಕ್ತರಿಗೆ ಹಾಗೂ ಅಂಗಡಿಕಾರರಿಗೆ ಯಾವುದೇ ತೊಂದರೆಯಾಗದಂತೆ ವಿಶಾಲವಾದ ಸ್ಥಳಾವಕಾಶ ಒದಗಿಸಿತ್ತು. ಜಾತ್ರೆಗೆ ಬಂದ ಭಕ್ತರಿಗೆ ಉತ್ತಮ ನೀರಿನ ವ್ಯವಸ್ಥೆ, ದರ್ಶನ ಪಡೆಯಲು ಸರದಿಯಲ್ಲಿ ನಿಲ್ಲಲು ಬ್ಯಾರಿಕೇಡ್ ನಿರ್ಮಾಣ, ವಾಹನ ಸವಾರರಿಗೆ ವಿಶೇಷ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಶನಿವಾರ ಸಂಜೆ ಚಕ್ಕಡಿಗಳು, ಟಂಟಂ ಹಾಗೂ ಟ್ಯಾಕ್ಟರ್ಗಳಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುವುದು ಕಂಡುಬಂದಿತು. ಭಾನುವಾರ ಜಾತ್ರೆಯ ಸಂಭ್ರಮ ಹೆಚ್ಚಳವಾಗಲಿದೆ.