ಶೆಟ್ಟಿಹಳ್ಳಿ ಬಳಿ ಮಾಲ್ಗುಡಿ ಎಕ್ಸ್ಪ್ರೆಸ್, ಚನ್ನಪಟ್ಟಣ ನಿಲ್ದಾಣದಲ್ಲಿ ಟಿಪ್ಪು ಎಕ್ಸ್ಪ್ರೆಸ್ ಹಾಗೂ ರಾಮನಗರ ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲುಗಳು ಮಧ್ಯಾಹ್ನ 3ರಿಂದ ಸಂಜೆ 5.30ರ ವರೆಗೂ ನಿಂತಿದ್ದವು. ನಂತರದಲ್ಲಿ ಎಲ್ಲ ರೈಲುಗಳ ಪ್ರಯಾಣ ಮುಂದುವರಿಯಿತು. ಪ್ರಯಾಣಿಕರ ಪರದಾಟ: ಏಕಾಏಕಿ ರೈಲುಗಳು ಸಂಚಾರ ಸ್ಥಗಿತಗೊಳಿಸಿದ ಪರಿಣಾಮ ನೂರಾರು ಪ್ರಯಾಣಿಕರು ಪರದಾಡಿದರು.