ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿ ದುರಸ್ತಿ: ರೈಲು ಪ್ರಯಾಣದಲ್ಲಿ ವ್ಯತ್ಯಯ

Last Updated 3 ಡಿಸೆಂಬರ್ 2017, 6:00 IST
ಅಕ್ಷರ ಗಾತ್ರ

ರಾಮನಗರ: ಚನ್ನಪಟ್ಟಣ ಹಾಗೂ ಶೆಟ್ಟಿಹಳ್ಳಿ ನಡುವಿನ ಹಳಿಗಳ ದುರಸ್ತಿ ಕಾರ್ಯದಿಂದಾಗಿ ಶನಿವಾರ ಮಧ್ಯಾಹ್ನ ಸುಮಾರು ಎರಡು ಗಂಟೆ ಕಾಲ ಪ್ರಯಾಣದಲ್ಲಿ ವ್ಯತ್ಯಯವಾಯಿತು.‌

ಶೆಟ್ಟಿಹಳ್ಳಿ ಬಳಿ ಮಾಲ್ಗುಡಿ ಎಕ್ಸ್‌ಪ್ರೆಸ್‌, ಚನ್ನಪಟ್ಟಣ ನಿಲ್ದಾಣದಲ್ಲಿ ಟಿಪ್ಪು ಎಕ್ಸ್‌ಪ್ರೆಸ್ ಹಾಗೂ ರಾಮನಗರ ನಿಲ್ದಾಣದಲ್ಲಿ ಪ್ಯಾಸೆಂಜರ್ ರೈಲುಗಳು ಮಧ್ಯಾಹ್ನ 3ರಿಂದ ಸಂಜೆ 5.30ರ ವರೆಗೂ ನಿಂತಿದ್ದವು. ನಂತರದಲ್ಲಿ ಎಲ್ಲ ರೈಲುಗಳ ಪ್ರಯಾಣ ಮುಂದುವರಿಯಿತು.‌ ಪ್ರಯಾಣಿಕರ ಪರದಾಟ: ಏಕಾಏಕಿ ರೈಲುಗಳು ಸಂಚಾರ ಸ್ಥಗಿತಗೊಳಿಸಿದ ಪರಿಣಾಮ‌ ನೂರಾರು ಪ್ರಯಾಣಿಕರು‌ ಪರದಾಡಿದರು.

ರಜೆ ದಿನವಾಗಿದ್ದರಿಂದ ಬೆಂಗಳೂರು- ಮೈಸೂರು ನಡುವೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ತೆರಳುತ್ತಿದ್ದರು. ರೈಲುಗಳು ನಿ‌ಂತ ಕಾರಣ ಜನರು ಪರದಾಡಿದರು. ಕೆಲವರು ಬಸ್ ನಿಲ್ದಾಣಗಳತ್ತ ತೆರಳಿದರೆ, ಇನ್ನೂ ಕೆಲವರು ರೈಲು ನಿಲ್ದಾಣ ಗಳಲ್ಲಿಯೇ ಅನಿವಾರ್ಯವಾಗಿ ಕಾಲ ಕಳೆದರು.

ಸೂಕ್ತ ಮಾಹಿತಿ ನೀಡದ ರೈಲ್ವೆ ಸಿಬ್ಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ಕುರಿತು ರೈಲ್ವೆ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, ಇದೊಂದು ಪೂರ್ವ ನಿಗದಿತ ಕಾಮಗಾರಿ ಆಗಿದ್ದು, ಮೊದಲೇ‌ ಮಾಹಿತಿ ನೀಡಲಾಗಿತ್ತು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT