ವೆಂಕಟೇಶ್ ಅವರು ಗೌರಿಬಿದನೂರು ತಾಲ್ಲೂಕಿನ ನಾಗಸಂದ್ರದವರು. ಇವರದು ರೈತ ಕುಟುಂಬ. ಕಾಲು ಕಳೆದುಕೊಂಡು ಕಂಗಾಲಾಗಿದ್ದ ಪುಟ್ಟ ಬಾಲಕನಿಗೆ ಅವರ ಸೋದರ ಮಾವ ರಾಮಾಂಜನ್ ರೆಡ್ಡಿ ಆಸರೆಯಾದರು. ಕೃತಕ ಕಾಲಿನ ಸಹಾಯ ಒದಗಿಸಿದ ಅವರು ವೆಂಕಟೇಶ್ ಅವರಿಗೆ ಕ್ರೀಡೆಯಲ್ಲಿದ್ದ ಆಸಕ್ತಿಗೆ ನೀರೆರೆದರು. ಇದೀಗ ಅವರು ವ್ಹೀಲ್ ಚೇರ್ ಫೆನ್ಸಿಂಗ್ ನಲ್ಲಿ ಏಷ್ಯಾದಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ.