ಉಡುಪಿ: ಅರಬ್ಬಿ ಸಮುದ್ರ ಒಖಿ ಚಂಡಮಾರುತದಿಂದ ಆತಂಕದಿಂದಾಗಿ ಮೀನುಗಾರಿಗೆ ತೆರಳಿದ ಬೋಟ್ಗಳು ಮಲ್ಪೆ ಬಂದರಿನಲ್ಲಿ ಲಂಗರು ಹಾಕಿ ನಿಲ್ಲಿಸಲಾಗಿದೆ. ಒಖಿ ಚಂಡಮಾರುತದ ಪರಿಣಾಮ ಪಡುಕರೆ, ಉದ್ಯಾವರದಲ್ಲಿ ಶನಿವಾರ ರಾತ್ರಿ ಅಲೆಗಳ ಅಬ್ಬರ ಜೋರಾಗಿತ್ತು. ಭಾನುವಾರ ಬೆಳಿಗ್ಗೆ ಅಲೆಗಳ ಆರ್ಭಟ ಕಡಿಮೆ ಇದ್ದರೂ ಸಂಜೆ ಆಗುತ್ತಿದ್ದಂತೆ ಒಖಿ ಚಂಡ ಮಾರುತಕ್ಕೆ ಸೂಪರ್ ಮೂನ್ ಜೊತೆಯಾಗುತ್ತಿದ್ದಂತೆ ಸಮುದ್ರ ಅಲೆಗಳ ಏರಿಳಿತದಲ್ಲಿ ವ್ಯತ್ಯಾಸ ಕಂಡು ಬಂತು.