12ನೇ ಶತಮಾನದಲ್ಲಿ ನಾವೆಲ್ಲರೂ ಅಸ್ಪೃಶ್ಯರಾಗಿದ್ದೇವು. ಪೇಜಾವರ ಶ್ರೀಗಳು ದಲಿತರ ಜತೆ ಊಟ ಮಾಡುವುದು ದೊಡ್ಡದಲ್ಲ, ಲಿಂಗಾಯತ ಗುರುಗಳ ಜತೆ ಊಟ ಮಾಡಬೇಕು. ಅಸ್ಪೃಶ್ಯತೆ ನಿವಾರಣೆ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು. ನಮ್ಮ ಮನೆಗೆ ಬಂದವರ ಜಾತಿ ಕೇಳದೆ ಪ್ರೀತಿಯಿಂದ ಕಾಣಬೇಕು. ದಲಿತರೂ ಬದಲಾಗಬೇಕು. ಅಂದಾಗ ಮಾತ್ರ ಈ ದೇಶ ಉಳಿಯುತ್ತದೆ. ಭಾರತವು ಬಹು ಸಂಸ್ಕೃತಿ, ಬಹುಜನಾಂಗದ ದೇಶ. ನಾವು ಧರ್ಮ, ಜಾತಿ ಆಧಾರಿತ ಹಿಂದೂ ರಾಷ್ಟ್ರ ಕಟ್ಟುವುದು ಬೇಡ, ಭಾವೈಕ್ಯದ ತಳಹದಿಯಲ್ಲಿ ಅಭಿವೃದ್ಧಿಪಥದ ಮೇಲೆ ರಾಷ್ಟ್ರ ಕಟ್ಟಬೇಕು. ನಮಗೆ ರಾಮರಾಜ್ಯ ಬೇಡ, ಅಭಿವೃದ್ಧಿಪರ ಕಲ್ಯಾಣ ರಾಜ್ಯ ಬೇಕು.