ಅಂಗವಿಕಲರ ಮಕ್ಕಳನ್ನು ಶಾಲೆಗೆ ಸೇರಿಸುವುದು, ಅಂಗವಿಕಲರ ಮಕ್ಕಳು ಓದು ಮುಂದುವರೆಯಲು ವಿವಿಧ ಇಲಾಖೆಗಳ ಸೌಲಭ್ಯಗಳು ಲಭ್ಯವಾಗುವಂತೆ ಜವಾಬ್ದಾರಿ ತೆಗೆದುಕೊಳ್ಳುವುದು, ಪೋಷಣಭಾಗ್ಯ ದೊರಕಿಸಿಕೊಡುವುದು, ಗಾಲಿ ಕುರ್ಚಿ ಕೊಡಿಸುವುದು, ಬುದ್ಧಿಮಾಂದ್ಯ ಮಕ್ಕಳಿಗೆ ಎಂಆರ್ ಕಿಟ್ ಸೌಲಭ್ಯ ನೀಡುವುದು, ವಿದ್ಯಾರ್ಥಿಗಳಿಗೆ ಪುಸ್ತಕ ಖರೀದಿಸಿಕೊಡುವುಲ್ಲಿ ಮಂಜಪ್ಪ ನೆರವಾಗುತ್ತಿದ್ದಾರೆ.