‘ಒಂದು ಕುಟುಂಬಕ್ಕೆ ತನ್ನ ನಿಷ್ಠೆ ತೋರಿಸುವುದಕ್ಕೆ ಲಜ್ಜೆ ಪಡದ ಮಣಿಶಂಕರ್ ಅಯ್ಯರ್ ತಮ್ಮ ಮಾತಿನಲ್ಲೇ ಇದನ್ನು ಸ್ಪಷ್ಟಪಡಿಸಿದ್ದಾರೆ. ‘ಜಹಾಂಗೀರ್ ಸ್ಥಾನಕ್ಕೆ ಷಹಜಹಾನ್ ಬಂದಾಗ ಯಾವುದೇ ಚುನಾವಣೆ ನಡೆದಿತ್ತೇ? ಷಹಜಹಾನ್ ಸ್ಥಾನಕ್ಕೆ ಔರಂಗಜೇಬ್ ಬಂದಾಗ ಯಾವ ಚುನಾವಣೆ ನಡೆದಿತ್ತು? ಅಧಿಕಾರ ರಾಜನ ಮಗನಿಗೇ ಬರುವುದು ಎಲ್ಲರಿಗೂ ಗೊತ್ತಿರುವಂಥದ್ದೇ’ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ಇದರಿಂದ ಕಾಂಗ್ರೆಸ್ ಒಂದು ಕುಟುಂಬಕ್ಕೆ ಸೇರಿದ ಪಕ್ಷ ಎಂದು ಆ ಪಕ್ಷದ ಮುಖಂಡರೇ ಒಪ್ಪಿಕೊಂಡಂತಾಗಿದೆ. ಆದರೆ, ನಮಗೆ ಔರಂಗಜೇಬ್ ಆಡಳಿತ ಬೇಕಿಲ್ಲ’ ಎಂದು ಮೋದಿ ತಿಳಿಸಿದ್ದಾರೆ.