ಯಮಕನಮರಡಿ: ಇಲ್ಲಿಯ ಪೊಲೀಸ್ ಠಾಣೆಯ ಪಕ್ಕದಲ್ಲೇ ಕಲ್ಲು ಗಣಿಗಾರಿಕೆ ಅಕ್ರಮವಾಗಿ ನಡೆಯುತ್ತಿದ್ದರೂ ಪೊಲೀಸರು ಮೌನರಾಗಿರುವುದು ಸಂಶಯಕ್ಕೆ ಎಡೆಯಾಗಿದೆ ಎಂದು ಬಿಜೆಪಿ ಮುಖಂಡ ಮಾರುತಿ ಅಷ್ಠಗಿ ಆರೋಪಿಸಿದರು.
ಪೊಲೀಸ ಠಾಣೆಯ ಪಕ್ಕದಲ್ಲಿಯೇ ನಡೆದ ಗಣಿಗಾರಿಕೆ ಸ್ಥಳಕ್ಕೆ ಸೋಮವಾರ ಭೇಟಿ ನೀಡಿದ ಅವರು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಾಗೂ ಗುತ್ತಿಗೆದಾರ ಈರಣ್ಣಾ ಬಿಸಿರೊಟ್ಟಿ ಅವರು ಸರ್ಕಾರಕ್ಕೆ ತೆರಿಗೆ ತುಂಬದೆ, ಕಲ್ಲು ಗಣಿಗಾರಿಕೆ ಮಾಡಲು ಮುಂದಾಗಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಮಾಸ್ತಿಹೊಳಿ ರಸ್ತೆ ಕಾಮಗಾರಿಯು ಕಳಪೆ ಗುಣಮಟ್ಟದಿಂದ ನಡೆಯುತ್ತಿದ್ದರೂ, ಕ್ಷೇತ್ರದ ಶಾಸಕರು ಗಮನ ಹರಿಸಿಲ್ಲ. ಸಂಬಂಧಿಸಿದ ಅಧಿಕಾರಿಗಳು ಸಹ ಇಂತಹ ಅಕ್ರಮಗಳ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈರಣ್ಣ ಹಾಲದೇವರಮಠ, ಪಾರೇಶ ಮಲಾಜಿ, ಪ್ರದೀಪ ಪತ್ತಾರ, ಕಲ್ಲಪ್ಪಾ ಕರಡಿ ಹಾಗೂ ಅಮೀತ ಕುಲಕರ್ಣಿಸಂತೋಷ ಮಲಾಜಿ ಇದ್ದರು.