ಎರಡು ವರ್ಷದ ಹಿಂದೆ ನರೇಗಾ ಯೋಜನೆಯಡಿ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ತಳಪಾಯವನ್ನು ತೆಗೆಯಲಾಯಿತು. ಬಳಿಕ, ಯಾವುದೇ ಕಾಮಗಾರಿ ನಡೆದಿಲ್ಲ. ಜನ ಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಯಾರು ಸಹ ಈ ಕೇಂದ್ರದ ಬಗ್ಗೆ ಗಮನ ನೀಡಿಲ್ಲ. ಮುಂದೆ ಮಳೆಗಾಲ ಬರುತ್ತಿದ್ದು, ಅಷ್ಟರೊಳಗೆ ಕೇಂದ್ರವನ್ನು ದುರಸ್ತಿ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಕಳಿಸುವುದಿಲ್ಲ ಎಂದು ಪೋಷಕರೊಬ್ಬರು ಅಸಮಾಧಾನದಿಂದ ಹೇಳಿದರು.