ನವದೆಹಲಿ: ದೂರಸಂಪರ್ಕ ಖಾತೆ ಮಾಜಿ ಸಚಿವ ಎ.ರಾಜಾ ವಿರುದ್ಧದ ಬಹುಕೋಟಿ 2ಜಿ ತರಂಗಾಂತರ ಹಂಚಿಕೆ ಹಗರಣದ ಆದೇಶವನ್ನು ಸಿಬಿಐನ ವಿಶೇಷ ನ್ಯಾಯಾಲಯ ಇದೇ 21ರಂದು ಪ್ರಕಟಿಸಲಿದೆ. ನ್ಯಾಯಾಧೀಶ ಒ.ಪಿ.ಸೈನಿ ಇದೇ ಏಪ್ರಿಲ್ನಿಂದಲೂ ಆದೇಶವನ್ನು ಕಾಯ್ದಿರಿಸಿದ್ದರು.
ಮಂಗಳವಾರ ನಡೆದ ವಿಚಾರಣೆ ವೇಳೆ, ಆರೋಪಿಗಳಾದ ರಾಜಾ ಹಾಗೂ ಡಿಎಂಕೆ ರಾಜ್ಯಸಭಾ ಸದಸ್ಯೆ ಕನಿಮೋಳಿ ಹಾಜರಿದ್ದರು.
ಎಸ್ಸಾರ್ ಗ್ರೂಪ್, ಲೂಪ್ ಟೆಲಿಕಾಂ ಪ್ರವರ್ತಕರ ವಿರುದ್ಧದ ಪ್ರಕರಣದ ಬಗ್ಗೆಯೂ ಇದೇ ದಿನ ಆದೇಶ ಪ್ರಕಟವಾಗಲಿದೆ.