‘ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಮಧ್ಯಾಹ್ನ ಒಂದು ಸಾವಿರ ಮಂದಿಗೆ ಊಟ ವಿತರಿಸಲಾಗುತ್ತದೆ. ಪ್ರತಿದಿನ ಬೇರೆ ಬೇರೆ ಮೆನು ಇರುತ್ತದೆ. ಚಿತ್ರಾನ್ನ, ಪಲಾವ್, ಬಿಸಿಬೇಳೆ ಬಾತ್, ಪೊಂಗಲ್ ಹಾಗೂ ಮೊಸರನ್ನ ನೀಡಲಾಗುತ್ತದೆ. ತ್ಯಾಗರಾಜನಗರದಲ್ಲಿರುವ ಟ್ರಸ್ಟ್ನಿಂದಲೇ ಆಹಾರವನ್ನು ಪೂರೈಸಲಾಗುತ್ತದೆ’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ನಾಗೇಶ್ ಢಾಕಪ್ಪ ತಿಳಿಸಿದರು.