‘ಸ್ವಾಮೀಜಿ ಅವರಿಗೆ ಇರುವುಷ್ಟೇ ಗೌರವ ಮಠಕ್ಕೆ ಬರುವ ಭಕ್ತರಿಗೂ ಇದೆ. ಆದರೆ, ಮಠಗಳಲ್ಲಿ ಸ್ವಾಮೀಜಿಗಳ ಸಮಾಧಿ ಮಾತ್ರ ನಿರ್ಮಿಸಿ ಪೂಜೆ ಸಲ್ಲಿಸಲಾಗುತ್ತದೆ. ಆದರೆ, ನಮ್ಮ ಮಠದಲ್ಲಿ ಭಕ್ತರೊಬ್ಬರ ಸಮಾಧಿ ನಿರ್ಮಿಸಿ ಹೊಸ ಪರಂಪರೆಗೆ ನಾಂದಿ ಹಾಡಲಿದ್ದೇವೆ’ ಎಂದು ಇಲ್ಲಿನ ಸಿದ್ಧಾರ್ಥ ನಗರದ ಸ್ಮಶಾನದಲ್ಲಿ ಬುಧವಾರ ನಡೆದ ‘ಮೌಢ್ಯ ಮೀರಿದ ನಡೆ ನಮ್ಮದಾಗಲಿ’ ಕಾರ್ಯಕ್ರಮದಲ್ಲಿ ತಿಳಿಸಿದರು.