ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಲು ಬುಧವಾರ ಗ್ರಾಮಕ್ಕೆ ಬಂದ ಸಚಿವರ ಬಳಿ ದೂರು ಹೇಳಿಕೊಂಡ ಗ್ರಾಮಸ್ಥರು, ‘ಪಿಡಬ್ಲ್ಯೂಡಿ ಅಧಿಕಾರಿಗಳು ವಿಶೇಷ ಘಟಕ ಯೋಜನೆಯಡಿ ದಲಿತ ಕಾಲೊನಿಗಳಲ್ಲಿ ಮಾತ್ರ ರಸ್ತೆ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸಿದ್ದಾರೆ. ದಲಿತ ಕಾಲೊನಿಗಳು ಒಳಗೊಂಡಂತೆ ಇಡೀ ಗ್ರಾಮಕ್ಕೆ ರಸ್ತೆ ನಿರ್ಮಿಸುವಂತೆ ಮನವಿ ಮಾಡಿದರೂ ಕಿರಿಯ ಎಂಜಿನಿಯರ್ ವೆಂಕಟೇಶ್ ಒಪ್ಪುತ್ತಿಲ್ಲ’ ಎಂದರು.