ಮಂಗಳವಾರ ತಡರಾತ್ರಿ ಕೂಡಳ್ಳಿ ಗ್ರಾಮದ ರೈತ ಶಂಕರೇಗೌಡ ಅವರ ಬಾಳೆ ತೋಟದಲ್ಲಿ ಸಂಚರಿಸಿ ಗೊನೆಬಿಟ್ಟ ಬಾಳೆಯನ್ನು ತಿಂದು ತುಳಿದು ನಾಶಗೊಳಿಸಿವೆ. ಮುಂಜಾನೆ ವೇಳೆಗೆ ಗ್ರಾಮದಿಂದ ಕಾಲ್ಕಿತ್ತಿರುವ ಕಾಡಾನೆಗಳು, ಕೂಡಳ್ಳಿ ಗ್ರಾಮದ ಮಾಧವ, ಆರ್. ಲೋಬೊ, ಡಿ.ಆರ್. ರಾಜು ಅವರ ತೋಟಗಳಲ್ಲಿ ಬೆಳೆ ನಾಶ ಮಾಡಿ ತ್ರಿಪುರ ಕಾಡಿನತ್ತ ತೆರಳಿವೆ. ಆನೆಗಳು ತಿರುಗಾಡಿರುವ ಹೆಜ್ಜೆ ಗುರುತ್ತಿದ್ದು, ಬಣಕಲ್ ಹೋಬಳಿಯಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ.