ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವಿತ ಪ್ರಮಾಣ ಪತ್ರ ಸಲ್ಲಿಸಲು ಪಿಂಚಣಿದಾರರಿಗೆ ಸೂಚನೆ

Last Updated 7 ಡಿಸೆಂಬರ್ 2017, 8:39 IST
ಅಕ್ಷರ ಗಾತ್ರ

ವಿಜಯಪುರ: ಬ್ಯಾಂಕ್, ಖಜಾನೆಯಿಂದ ವಿವಿಧ ರೀತಿಯ ನಿವೃತ್ತ ಪಿಂಚಣಿ ಪಡೆಯುವ ಪಿಂಚಣಿದಾರರು, ಜೀವಿತ ಪ್ರಮಾಣ ಪತ್ರ ಸಲ್ಲಿಸುವಂತೆ ಜಿಲ್ಲಾ ಖಜಾನೆ ಉಪ ನಿರ್ದೇಶಕರು ತಿಳಿಸಿದ್ದಾರೆ.

ನಿವೃತ್ತ ಪಿಂಚಣಿ, ಪಿಂಚಣಿ, ಪುರಸಭೆಯ ಪಿಂಚಣಿ, ಸ್ವಾತಂತ್ರ್ಯ ಯೋಧರ ಹಾಗೂ ಕಲಾವಿದರ ಪಿಂಚಣಿಯನ್ನು ಪಡೆಯುತ್ತಿರುವ ಪಿಂಚಣಿದಾರರು ಪ್ರತಿ ವರ್ಷ ನವೆಂಬರ್ ತಿಂಗಳ ಪಿಂಚಣಿಯನ್ನು ಪಡೆಯುವಾಗ ಸೇವಾ ಪಿಂಚಣಿದಾರರು ಕಡ್ಡಾಯವಾಗಿ ಜೀವಿತ ಪ್ರಮಾಣ ಪತ್ರ ಹಾಗೂ ಕುಟುಂಬ ಪಿಂಚಣಿದಾರರು ಪುನರ್ ವಿವಾಹ ಆಗದೆ ಇರುವ ಬಗ್ಗೆ ನೋರಿ ಮ್ಯಾರೇಜ್ ಸರ್ಟಿಫಿಕೇಟನ್ನು ತಾವು ಪಿಂಚಣಿ ಪಡೆಯುತ್ತಿರುವ ಸಂಬಂಧಿಸಿದ ಬ್ಯಾಂಕ್, ಖಜಾನೆಗೆ ಸಲ್ಲಿಸಲು ಸೂಚಿಸಲಾಗಿದೆ.

ಸಲ್ಲಿಸದಿದ್ದಲ್ಲಿ ಡಿಸೆಂಬರ್‌ನಿಂದ ಅಂತಹ ಪಿಂಚಣಿದಾರರ ಪಿಂಚಣಿ ತಡೆ ಹಿಡಿಯಲಾಗುವುದು ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT