ಇನಿಂಗ್ಸ್ ನ ಒಂಬತ್ತನೇ ಓವರ್ ನಲ್ಲಿ ವಿನಯ್ ಅವರು ಸಿದ್ಧೇಶ್ ಲಾಡ್ ವಿಕೆಟ್ ಕಬಳಿಸಿದರು. ಎಡಗೈ ಮಧ್ಯಮವೇಗಿ ಎಸ್. ಅರವಿಂದ್, ಅಭಿಮನ್ಯು ಮಿಥುನ್ ಮತ್ತು ಸ್ಪಿನ್ಲರ್ ಕೆ. ಗೌತಮ್ ತಲಾ ಒಂದು ವಿಕೆಟ್ ಪಡೆದರು. ಇದರಿಂದಾಗಿ ಮುಂಬೈ ತಂಡವು ಊಟದ ವಿರಾಮಕ್ಕೆ 30 ಓವರ್ ಗಳಲ್ಲಿ 7 ವಿಕೆಟ್ ಗಳಿಗೆ 90 ರನ್ ಗಳಿಸಿತು.