ಮೈಸೂರು: ಕುಕ್ಕರಹಳ್ಳಿ ಕೆರೆಯಲ್ಲಿ ಅಸ್ವಸ್ಥಗೊಂಡಿದ್ದ ಹೆಜ್ಜಾರ್ಲೆ (ಪೆಲಿಕಾನ್) ಗುರುವಾರ ಮೃತಪಟ್ಟಿದೆ. ಮತ್ತೊಂದು ಹೆಜ್ಜಾರ್ಲೆ ಅಸ್ವಸ್ಥಗೊಂಡಿದೆ.
‘ಪಶುವೈದ್ಯರು ಕೆರೆ ಪ್ರದೇಶವನ್ನು ಪರಿಶೀಲಿಸಿದ್ದಾರೆ. ಹಕ್ಕಿಜ್ವರದ ಆತಂಕ ಬೇಡ. ಸತ್ತಿರುವ ಪಕ್ಷಿಯನ್ನು ಪರೀಕ್ಷೆಗೆ ಬೆಂಗಳೂರಿನ ಪಶು ವೈದ್ಯಕೀಯ ಸಂಸ್ಥೆಯ ಪ್ರಯೋಗಾಲಯಕ್ಕೆ ರವಾನಿಸಿದ್ದೇವೆ’ ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಪ್ರಸಾದ್ ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.