ಮಗುವಿನ ತಂದೆಗೆ ಸೇರಿದ ಅಂಗಡಿಯಲ್ಲೇ ಕೆಲಸ ಮಾಡುತ್ತಿದ್ದ ಆತನ ಭಾವ, ಕುಟುಂಬ ಸಮೇತ ಉತ್ತರ ಪ್ರದೇಶಕ್ಕೆ ಹೋಗಿದ್ದರು. ಈ ಸಮಯದಲ್ಲಿ ಮನೆಯಲ್ಲಿ ಒಬ್ಬನೇ ಇದ್ದ ಬಾಲಕ, ಸಂಜೆ ಹೊರಗೆ ಆಟವಾಡುತ್ತಿದ್ದ ಮಗುವನ್ನು ಆಮಿಷ ತೋರಿಸಿ ಒಳಗೆ ಕರೆದೊಯ್ದಿದ್ದ. ಬಳಿಕ ಮಗುವನ್ನು ಬಿಡುಗಡೆ ಮಾಡಲು ₹ 20 ಲಕ್ಷ ನೀಡುವಂತೆ ಆಗ್ರಹಿಸಿ, ಅಪರಿಚಿತನ ಸೋಗಿನಲ್ಲಿ ನೆರೆಮನೆಯವರಿಗೆ ಫೋನ್ ಮಾಡಿದ್ದ. ಆತಂಕಗೊಂಡ ಪೋಷಕರು ಪೊಲೀಸರಿಗೆ ತಿಳಿಸಿದ್ದರು. ಬಳಿಕ, ಫೋನ್ ಕರೆ ಆಧರಿಸಿ ಪೊಲೀಸರು ನೆರೆಮನೆಗೆ ಬಂದಾಗ, ಮಗು ಕೂಗಿಕೊಳ್ಳಬಹುದು ಎಂದು ಆತಂಕಗೊಂಡ ಬಾಲಕ, ಆಕೆಯನ್ನು ಕೊಂದು ದೇಹವನ್ನು ವಾಟರ್ ಕೂಲರ್ನಲ್ಲಿ ಬಚ್ಚಿಟ್ಟಿದ್ದ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.