ಹೊಸಕೋಟೆ: ತಾಲ್ಲೂಕು ಆಡಳಿಕ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 61ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಶಾಸಕ ಎನ್. ನಾಗರಾಜು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ತಾಲ್ಲೂಕು ಘಟಕದ ಮಾದಾರ ಮಹಾಸಭಾ, ಪರಿನಿರ್ವಾಣ ದಿನಾಚರಣೆ ಅಂಗವಾಗಿ ತಾಲ್ಲೂಕು ಕಚೇರಿ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ ಏರ್ಪಡಿಸಿತ್ತು. ಸಭಾದ ಮುಖ್ಯಸ್ಥ ಎಚ್.ಎಂ.ಸುಬ್ಬರಾಜು ಶಿಬಿರಕ್ಕೆ ಚಾಲನೆ ನೀಡಿದರು.
ತಾಲ್ಲೂಕು ಶಾಖೆ ದಲಿತ ಸಂಘರ್ಷ ಸೇನೆ ಕಚೇರಿಯಲ್ಲಿ ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಜಿ.ಆನಂದ್ ಅಂಬೇಡ್ಕರ್ ಭಾವಚಿತ್ರಕ್ಕೆ ಪುರ್ಪನಮನ ಸಲ್ಲಿಸಿದರು.