ಬೆಂಗಳೂರು: ‘ಪ್ರತಿಷ್ಠಾನವು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಅನುಷ್ಠಾನ ಮಾಡುತ್ತಿದೆ. ಈ ಯೋಜನೆಯಡಿ 13,900 ಶಾಲೆಗಳಿಗೆ ಉಚಿತ ಊಟ ನೀಡಲಾಗುತ್ತಿದೆ’ ಎಂದು ಅಕ್ಷಯ ಪಾತ್ರ ಪ್ರತಿಷ್ಠಾನ ಸ್ಪಷ್ಟಪಡಿಸಿದೆ.
‘ಪ್ರಜಾವಾಣಿ’ಯಲ್ಲಿ ಡಿ.5ರಂದು ಪ್ರಕಟವಾದ ‘25 ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ’ ಸುದ್ದಿಗೆ ಈ ಸ್ಪಷ್ಟನೆ ನೀಡಿದ್ದು, ‘ಕರ್ನಾಟಕ
ದಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಅಕ್ಷರ ದಾಸೋಹವನ್ನು ಅನುಷ್ಠಾನ ಮಾಡುತ್ತಿದೆ’ ಎಂದು ತಿಳಿಸಿದೆ.